⚠️ ಕನ್ನಡ ಮಾಧ್ಯಮ ಉಚಿತ ಶಿಕ್ಷಣ ಅರ್ಜಿ ಆಹ್ವಾನ ⚠️

ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸ್ವಾಗತ

“ಜ್ಞಾನವು ತೋಟದಂತೆ; ಅದನ್ನು ಬೆಳೆಸದೆ ಹೋದರೆ ಫಲವನ್ನು ಪಡೆಯಲಾಗದು.”

“ನಹೀ ಜ್ಞಾನೇನ ಸದೃಶ್ಯಂ” “ವಿದ್ಯೆಗೆ ಸಮಾನವಾದ ವಸ್ತು ಜಗತ್ತಿನಲ್ಲಿ ಯಾವುದು ಇರಲಾರದು” ಎಂಬ ಮಾತಿನಂತೆ ಜ್ಞಾನದಾಹಿಗಳಾಗಿ ಈ ಸಂಸ್ಥೆಯನ್ನು ಹೊಕ್ಕಿರುವ ಭವ್ಯಭಾರತದ ದಿವ್ಯ ಪ್ರಜೆಗಳಲ್ಲಿ ಕಾಲಕ್ಕೆ ತಕ್ಕದಾದ ವಿದ್ಯೆ, ಪೂರಕವಾದ ಬುದ್ಧಿ ಮತ್ತು ಸೂಕ್ತವಾದ ಮನಸ್ಸನ್ನು ಬಾಲ್ಯದಲ್ಲಿಯೇ ಕಟ್ಟುವ ಕೈಂಕರ್ಯಕ್ಕೆ ತೊಡಗಿದರೆ ನಾಡು ಮೆಚ್ಚುವ ಪ್ರತಿಭಾನ್ವಿತರ ಸೃಷ್ಟಿಯಾಗುತ್ತದೆ” ಎಂಬ ಮಾತನ್ನು ಸದಾ ಕಾಲ ಸರ್ವರಲ್ಲಿಯೂ ಹೇಳುತ್ತಾ ಬಂದ ಕನಸುಗಾರ ಡಾ.ಎಂ.ಮೋಹನ ಆಳ್ವ.
ಜೈನಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಮೂಡಬಿದಿರೆಯ ಹಿರಿಮೆಯನ್ನು ಜಗದಗಲಕ್ಕೆ ಪಸರಿಸುವಂತೆ ಮಾಡಿದ ಕೀರ್ತಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ್ದು. ಅದಕ್ಕೆ ಕಾರಣ ಡಾ. ಎಮ್ ಮೋಹನ ಆಳ್ವಾರ ದೂರದೃಷ್ಟಿ, ಸಾಮಾಜಿಕ ಕಳಕಳಿ ಹಾಗೂ ವಾಸ್ತವಿಕತೆ. ಆಳ್ವಾಸ್ ನುಡಿಸಿರಿಯ ಆಶಯಭಾವದೊಂದಿಗೆ, ಕನ್ನಡವನ್ನು ಕನ್ನಡಿಗರ ಜೀವವಾಗಿಸುವ ಹಿನ್ನೆಲೆಯಲ್ಲಿ, ಕ್ರೀಡಾಸಾಧಕರ ಪ್ರತಿಭೆಗಳಿಗೆ ಪೂರಕ ವಾತಾವರಣ ಸೃಷ್ಟಿಸುವ ಹಿನ್ನೆಲೆಯಲ್ಲಿ, ಸಮಾಜದ ಸರ್ವರಿಗೂ ಸಮಬಾಳು ಎನ್ನುವ ನೆಲೆಯಲ್ಲಿ, ಹಿಂದುಳಿದ ವರ್ಗಗಳ ಉತ್ತೇಜಿಸುವ ನೆಲೆಯಲ್ಲಿ, ರಾಷ್ಟ್ರಸೇವೆ ಮತ್ತು ದೇಶಸೇವೆಯಂತಹ ಕರ್ತವ್ಯದಲ್ಲಿ ತೊಡಗಿಕೊಂಡಿರುವವರ ಗೌರವದ ನೆಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸುಪ್ತ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಹಿನ್ನೆಲೆಯಲ್ಲಿ, ನಮ್ಮತನದ ಅಥವಾ ಶ್ರೀಸಾಮಾನ್ಯನ ನೆಲೆಗಟ್ಟಿನಲ್ಲಿ ಕನ್ನಡ ಭಾಷೆಗೆ ಸೋಲಾಗದಂತೆ ಕಾಳಜಿಯನ್ನು ಹೊಂದಿದ ಒಬ್ಬ ಆಯುರ್ವೇದ ವೈದ್ಯ ೨೦೦೯ – ೧೦ನೇ ಸಾಲಿನಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದ್ದು ಕರ್ನಾಟಕದ ಶಿಕ್ಷಣ ಇಲಾಖೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಏಕಕಾಲದಲ್ಲಿ ೮, ೯, ಮತ್ತು ೧೦ನೇ ತರಗತಿಗಳಿಗೆ ಆಗಿನ ಕಾಲದ ಗೃಹಸಚಿವರಾಗಿದ್ದಂತಹ ದಿ|. ವಿ. ಎಸ್. ಆಚಾರ್ಯರವರ ಸೂಕ್ತ ನಿರ್ದೇಶನದನುಸಾರ ಅನುಮತಿಯನ್ನು ಪಡೆದುಕೊಂಡು ಕ್ರಮಬದ್ಧ ಮತ್ತು ಕಾಲಕ್ಕೆ ಪೂರಕವಾದ ಶಿಕ್ಷಣವನ್ನು “ದತ್ತು ಶಿಕ್ಷಣ ಯೋಜನೆ”ಯಡಿಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಈ ವಿದ್ಯಾಸಂಸ್ಥೆ ನೀಡುತ್ತಾ ಬರುತ್ತಿದೆ.

                                               ವಿಶೇಷತೆಗಳು

  • ಸಂಪೂರ್ಣ ಉಚಿತ ವಸತಿ, ಊಟೋಪಚಾರ ಶಿಕ್ಷಣ ವ್ಯವಸ್ಥೆ
  • ಪಾರದರ್ಶಕವಾಗಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ – ಕ್ರೀಡೆ, ಮಲ್ಲಕಂಬ, ಯೋಗ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಿ ಆಯ್ಕೆ ನಡೆಸಲಾಗುತ್ತದೆ.
  • ನುರಿತ, ಅನುಭವಿ ಮತ್ತು ಉತ್ತಮ ಗುಣಮಟ್ಟದ ತಾಂತ್ರಿಕತೆ ಹಾಗೂ ಸ್ಪರ್ಧಾತ್ಮಕತೆಯ ಬಗ್ಗೆ ತಿಳುವಳಿಕೆ ಹೊಂದಿರುವ ಶಿಕ್ಷಕ ವೃಂದ.
  • ಎಲ್ಲಾ ವಿದ್ಯಾರ್ಥಿಗಳನ್ನು ಆಪ್ತತೆಯಿಂದ ಹಾಗೂ ಎಲ್ಲಾ ಶಾಲಾ ದಾಖಲೆಗಳನ್ನು ಜತನದಿಂದ ಕಾಯ್ದುಕೊಳ್ಳುವ ಶಾಲಾ ಕಛೇರಿ ವೃಂದ.
  • ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ಉಚಿತವಾಗಿ ಶಾಸ್ತ್ರೀಯ ಸಂಗೀತ, ಪಕ್ಕವಾದ್ಯ, ನೃತ್ಯಗಳು ಹಾಗೂ ಜನಪದ ಸಂಗೀತ ಮತ್ತು ನೃತ್ಯ ತರಬೇತಿಗಳು.
  • ವೈದ್ಯಕೀಯ, ಇಂಜಿನಿಯರಿಂಗ್ ಉನ್ನತ ಹುದ್ದೆಗಳ ಕನಸು ನನಸಾಗಿಸಲು ಆರನೇ ತರಗತಿಯಿಂದಲೇ ನುರಿತ ಉಪನ್ಯಾಸಕರಿಂದ ಐ.ಐ.ಟಿ. ತರಬೇತಿ.
  • ಭಾಷೆಯ ಹಿಡಿತ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಕ.ಸಾ.ಪ. ಪರೀಕ್ಷೆಗಳು, ಹಿಂದಿ ಪ್ರಚಾರಸಭಾ ಪರೀಕ್ಷೆಗಳು, ಜಿ.ಕೆ. ಪರೀಕ್ಷೆಗಳು, ಡ್ರಾಯಿಂಗ್ ಗ್ರೇಡ್ ಪರೀಕ್ಷೆಗಳು, ಶಾಂತಿವನ ಟ್ರಸ್ಟ್ ಸ್ಪರ್ಧೆಗಳು ನಡೆಯುತ್ತವೆ.
  • ವಿದ್ಯಾರ್ಥಿಗಳ ಶಿಸ್ತನ್ನು ರೂಪಿಸುವಲ್ಲಿ ಪೂರಕವಾಗಿರುವ ಎನ್.ಸಿ.ಸಿ. (ಆರ್ಮಿ, ನೇವಿ, ಎರ್‌ಫೋರ್ಸ್) ಕೇಂದ್ರಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳು ಇಲ್ಲಿವೆ.
  • ವಿದ್ಯಾರ್ಥಿಗಳ ಶೈಕ್ಷಣಿಕ ಆಗು-ಹೋಗುಗಳನ್ನು ಗುರುತಿಸಲು ಸಮಸ್ಯೆಗಳಿದ್ದಲ್ಲಿ ತಿಳಿದು ಸಲಹೆ ನೀಡಲು “ಮನಸ್ಸು” ಆಪ್ತಸಮಾಲೋಚನ ಕೇಂದ್ರವಿದೆ.
  • ಪೂ. ೯.೦೦ ರಿಂದ ಅ.೪.೦೦ ರವರೆಗೆ ಪ್ರತಿನಿತ್ಯ ತರಗತಿಗಳ ಜೊತೆಗೆ ಶಿಕ್ಷಕರ ಉಪಸ್ಥಿತಿಯೊಂದಿಗೆ ಪ್ರತಿದಿನವೂ ೧.೩೦ ನಿ. ವಿಶೇಷ ಅಧ್ಯಯನ ತರಗತಿಗಳು ನಡೆಯುತ್ತವೆ.
  • ವಿದ್ಯಾರ್ಥಿಗಳ ಬಗ್ಗೆ ಪ್ರೀತಿಯೊಂದಿಗೆ ಕಾಳಜಿ ಹೊಂದಿದ ಉತ್ತಮ ನುರಿತ ವಿದ್ಯಾರ್ಥಿನಿಲಯ ಪಾಲಕರು ಲಭ್ಯರಿರುತ್ತಾರೆ.
  • ವಿದ್ಯಾರ್ಥಿ ನಿಲಯದಲ್ಲಿ ಅತ್ಯುತ್ತಮ ವಸತಿ, ಬಿಸಿ ನೀರು, ಗುಣಮಟ್ಟದ ಊಟ-ಉಪಹಾರದ ಜೊತೆಗೆ ವಿದ್ಯಾರ್ಥಿಗಳ ಕಲಿಕಾ ಆಸಕ್ತಿಗಳನ್ನು ಹೆಚ್ಚಿಸುವ ಚಟುವಟಿಕೆಗಳು ಹಾಗೂ ವಿದ್ಯಾರ್ಥಿ ಕೇಂದ್ರಿತ ಅಧ್ಯಯನ ಸಮಯವಿರುತ್ತದೆ.
  • ಅನಾರೋಗ್ಯ ಸಂಧರ್ಭದಲ್ಲಿ ೨೪ x ೭ ತಜ್ಞ ವೈದ್ಯರಿಂದ ವೈದ್ಯಕೀಯ ವ್ಯವಸ್ಥೆ ಇರುತ್ತದೆ.
ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸ್ವಾಗತ

ಕನ್ನಡ ಮಾಧ್ಯಮ ಶಾಲೆಗಳು ದತ್ತು ಯೋಜನೆಯಡಿ (ಶೈಕ್ಷಣಿಕ ಮತ್ತು ಸಾಂಸ್ಕೃತಿಕ) “ಉತ್ತಮ ನಾಳೆಯನ್ನು ರೂಪಿಸುವುದು” ಎಂಬ ಚಿಹ್ನೆಯೊಂದಿಗೆ ನಡೆಯುತ್ತಿವೆ.

  • ಶಾಲೆ ಪ್ರಾರಂಭವಾದ ವರ್ಷ
    ಜುಲೈ 2009 - 2010
  • ತರಗತಿಯ ಗಾತ್ರ
    ಗರಿಷ್ಠ 35 ವಿದ್ಯಾರ್ಥಿಗಳು
  • ಸಮಯ
    ಬೆಳಿಗ್ಗೆ 9:00 – ಸಂಜೆ 4:00
  • ಸಾರಿಗೆ:
    ಸ್ಥಳೀಯ ವಿದ್ಯಾರ್ಥಿಗಳಿಗೆ ಲಭ್ಯ

ಸಂಸ್ಥೆಯ ಧ್ಯೇಯ ಮತ್ತು ಉದ್ದೇಶಗಳು

"ಮೌಲ್ಯಮಯ ಶಿಕ್ಷಣ ನೀಡುವ, ಯುವಜನರನ್ನು ಸಾಂಸ್ಕೃತಿಕ ಮೌಲ್ಯಗಳು ಮತ್ತು ದೇಶಭಕ್ತಿಯ ಮೇಲೆ ನೆಲಸಿಸುವ ಧ್ಯೇಯವನ್ನು ಶಿಕ್ಷಣ ಸಂಸ್ಥೆಯ ಬಹುಮಾಹಿತಿ ಚಟುವಟಿಕೆಗಳ ಮೂಲಕ ಸಾಧಿಸಲಾಗಿದೆ."

Prashanth B, M.Sc., B.Ed (1)
ಮುಖ್ಯೋಪಾಧ್ಯಾಯರು

ಪ್ರಶಾಂತ್ ಬಿ, M.Sc., B.Ed

ಮುಖ್ಯೋಪಾಧ್ಯಾಯರ ನುಡಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯು (ರಾಜ್ಯಪಠ್ಯಕ್ರಮ) ಕಳೆದ ಹದಿನೈದು ವರ್ಷಗಳಿಂದ ಅತ್ಯುತ್ತಮ ಸಾಧನೆಗೈಯುತ್ತಿದ್ದು, ಶಾಲೆ ಪ್ರಾರಂಭವಾಗಿ 15 ವರ್ಷಗಳಾಗಿದ್ದು ಇಂದಿನವರೆಗೂ ನಿರಂತರವಾಗಿ ಶೇ 100% ಅತ್ಯುತ್ತಮ ಫಲಿತಾಂಶ ದಾಖಲಿಸುತ್ತಾ ರಾಜ್ಯ ಶೈಕ್ಷಣಿಕ ಮೌಲ್ಯಂಕನ ಮಂಡಳಿಯಿಂದ ರಾಜ್ಯದ “ಅತ್ಯುನ್ನತ ಶಾಲೆ” ಎಂಬ ಮಾನ್ಯತೆ ಪಡೆದಿದೆ ಎಂಬುದನ್ನು ತಿಳಿಸಲು ಅಭಿಮಾನ ಹಾಗೂ ಹೆಮ್ಮೆ ಪಡುತ್ತೇನೆ. ಪ್ರಾರಂಭದ ದಿನಗಳಲ್ಲಿ 60 ಮಕ್ಕಳು ಮತ್ತು 7 ಶಿಕ್ಷಕರಿಂದ ಆರಂಭವಾದ ನಮ್ಮ ಶಾಲೆ ಪ್ರಸ್ತುತ 243 ಮಕ್ಕಳು ಮತ್ತು 13 ಶಿಕ್ಷಕರು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಸಂಸ್ಥೆಯ ಅಧ್ಯಕ್ಷರಾದ ಗೌರವಾನ್ವಿತ ಡಾ|| ಎಂ. ಮೋಹನ್ ಅಳ್ವ ಅವರ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಬೆಂಬಲದೊಂದಿಗೆ ಶಿಕ್ಷಕರ ಕಠಿಣ ಪರಿಶ್ರಮ, ಸಮರ್ಪಣಾಭಾವದಿಂದ ಶಾಲೆಯು ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುತ್ತಿದೆ.

ಶಿಕ್ಷಣದ ಜೊತೆ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರತೀ ವರ್ಷವೂ ಕೂಡ ವಿದ್ಯಾರ್ಥಿಗಳ ಸಾಧನೆ ಅನನ್ಯವಾದದ್ದು. ರಾಜ್ಯಮಟ್ಟದ ಪ್ರತಿಭಾ ಕಾರಂಜಿ, ನಾಟಕ, ಕವ್ಹಾಲಿ ಸ್ಪರ್ಧೆಯಲ್ಲಿ ವಿಜೇತರಾಗಿ ಶಾಲೆಯ ಗೌರವವನ್ನು ಇನ್ನಷ್ಟೂ ಹೆಚ್ಚಿಸಿದ್ದಾರೆ. ಸ್ಥಳೀಯ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಂಸ್ಥೆಯ ಹೆಸರು ಹಾಗೂ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಂಸ್ಥೆಯ ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದ ಸಾಧನೆಗಳನ್ನು ಪಟ್ಟಿ ತಯಾರಿಸಲು ಹೊರಟರೆ ಪುಸ್ತಕಗಳೇ ಸಾಕಾಗಬಹುದೇನೋ ಅನ್ನಿಸುವಂತಾಗುತ್ತದೆ.

ಎಲ್ಲೆಡೆ ಕನ್ನಡ ಭಾಷಾಭಿಮಾನವು ಪ್ರತಿನಿತ್ಯ ಮೊಳಗುತ್ತಿದ್ದರೂ, ಕರ್ನಾಟಕದಲ್ಲೇ ಕನ್ನಡ ಶಾಲೆಗಳು ಮುಚ್ಚುತ್ತಿರುವ, ವಿಲೀನಗೊಳ್ಳುತ್ತಿರುವ, ಇಂಗ್ಲೀಷ್ ಮಾಧ್ಯಮವಾಗಿ ಪರಿವರ್ತನೆಗೊಳ್ಳುತ್ತಿರುವ, ಕನ್ನಡ ನೆಲದಲ್ಲೇ ಕನ್ನಡ ಶಾಲೆಗಳು ಅಳಿವಿನಂಚಿನಲ್ಲಿರುವ ಕೊರಗಿನ ನಡುವೆಯೇ ಆಳ್ವಾಸ್‌ನ ಕನ್ನಡ ಮಾದರಿ ಶಾಲೆಯೊಂದು ರಾಜ್ಯದಲ್ಲೇ “ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆ” ಎಂಬ ಗರಿಮೆಗೆ ಪಾತ್ರವಾಗಿರುವುದು ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದ್ದು, ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಲು ನಾನು ಬಯಸುತ್ತೇನೆ.

SSLC Result Board

ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆ, ವಿವೇಕಾನಂದನಗರ, ಪುತ್ತಿಗೆ

ಎಸ್‌.ಎಸ್‌.ಎಲ್‌.ಸಿ ಫಲಿತಾಂಶ

ವರ್ಷ ಒಟ್ಟು ವಿದ್ಯಾರ್ಥಿಗಳು 625 624 623 622 621 620 600 ಕ್ಕಿಂತ ಹೆಚ್ಚು ಉನ್ನತ ಶ್ರೇಣಿ ಪ್ರಥಮ ಶ್ರೇಣಿ ದ್ವಿತೀಯ ಶ್ರೇಣಿ ಉತ್ತೀರ್ಣ ಶಾಲಾ ಶೇಕಡಾವಾರು
2009-1018-------0936100%
2010-1119------111422100%
2011-1226------181071100%
2012-1356------237163-100%
2013-1470------10521332100%
2014-1592------87517--100%
2015-16130------3296331-100%
2016-17132----1-3697323-100%
2017-18155----1-23114383-100%
2018-19157----125614017--100%
2019-20160---2235413921--100%
2020-211601-5-5-10514713--100%
2021-2212657578-96107172-100%
2022-23107---112489593-100%
2023-24115------4110312--100%
2024-25117--1-356710413--100%

SSLC Results PDF

SSLC Results (2009–2024)

Open in New Tab
team-2-shape-2
team-2-shape-1
Our Team

Meet our expert & smart
superheroes!

Questions

Questions and answers

faq

What is the Criteria For Student Selection ?

1)Students with excellent performance in academics selected through entrance test. 2)Students with extremely good performance in cultural activities like musical instrument, classical dance, yakshagana, drama, mallakamba, yoga. 3)Students with sports background will be selected after the 10days of sports selection camp which will be tentatively held in the month of April-May of every year. 4)Socially backward students.

what are the Facilities For Students Under Sports Quota ?

1)Separate hostel for boys and girls are given along with free food, accommodation and coaching.
2)Well organized playground with 400 mtrs synthetic track.
3)Separate coach for different events. Materials
4)Special care taken even in academics.

For can you slack accountable talk to me?

This vendor is incompetent suite, nor this is not a video game, this is but drink the Kool-aid, yet sorry i was triple muted. Push back synergize productive mindfulness, thought shower, flesh that out note for the previous submit We have to leverage up the messaging

What Happens to my data if I cancel?

This vendor is incompetent suite, nor this is not a video game, this is but drink the Kool-aid, yet sorry i was triple muted. Push back synergize productive mindfulness, thought shower, flesh that out note for the previous submit We have to leverage up the messaging

Contact with Us

Feel free to write us
anytime